ಟ್ರಿಲಿಯನ್ ಡಾಲರ್ ಎಕನಾಮಿಯ ಒಳ ಹೊರಗೆ ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ
₹80.00
ಟ್ರಿಲಿಯನ್ ಡಾಲರ್ ಎಕನಾಮಿಯ ಒಳ ಹೊರಗೆ ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ
ಭಾರತದ ಸಂವಿಧಾನ ಈ ದೇಶದಲ್ಲಿ ಯಾವುದೇ ಜಾತಿ, ವರ್ಗ, ವರ್ಣ, ಲಿಂಗ ಅಥವಾ ಧರ್ಮಾಧಾರಿತ ತಾರತಮ್ಯಗಳಿಲ್ಲದ ಸಮಾಜವನ್ನು ನಿರ್ಮಿಸುವ ಧೈಯ ಹೊಂದಿದೆ. ಇಂತಹ ಸಮಾಜವನ್ನು ರೂಪಿಸುವ ಜವಾಬ್ದಾರಿಯನ್ನು ಪ್ರಭುತ್ವ ಮತ್ತು ಸಮಾಜದ ಮೇಲೆ ಹೊರಿಸಿದೆ. ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದ ಮೌಲ್ಯಗಳು ಈ ದೇಶದ ಮೌಲಿಕ ಅಡಿಪಾಯವಾಗಿರಬೇಕು. ಈ ಮೌಲ್ಯಗಳು ಸರ್ಕಾರ ಮತ್ತು ಸಮಾಜದ ನಡೆಯಲ್ಲಿ ಮಾರ್ಗದರ್ಶಿ ಸೂತ್ರಗಳಾಗಿಯೂ ಇರಬೇಕೆನ್ನುವುದು ನಮ್ಮ ದೇಶದ ಸಂವಿಧಾನದ ಆಶಯಗಳಾಗಿವೆ. ಈವರೆಗೆ ಶೋಷಣೆ, ದಮನಕ್ಕೊಳಗಾದ ಜನರೇ ಈ ದೇಶದ ಚುಕ್ಕಾಣಿ ಹಿಡಿಯುವಂತೆ ಈ ದೇಶದ ಆರ್ಥಿಕತೆ, ಸಾಮಾಜಿಕ, ರಾಜಕೀಯ, ಶಿಕ್ಷಣ ಮತ್ತು ಸಂಸ್ಕೃತಿಗಳು ರೂಪುಗೊಳ್ಳುವ ದಿಕ್ಕಿನಲ್ಲಿ ಸಮಾಜ ನಡೆಯುವಂತಾಗಬೇಕೆಂಬುದು ಸ್ವಾತಂತ್ರ್ಯ ಹೋರಾಟದ ಆಶಯಗಳು ಹೌದು; ಸಂವಿಧಾನಾತ್ಮಕ ನಿರ್ದೇಶನವೂ ಹೌದು. ಆದರೆ ಸ್ವಾತಂತ್ರ್ಯಗಳಿಸಿಕೊಂಡು 70 ವರ್ಷಗಳಾದ ನಂತರದಲ್ಲಿ ನಮ್ಮ ನಡೆಯನ್ನು ಪುನರಾವಲೋಕಿಸುವುದಾದರೆ ಈ ದೇಶದಲ್ಲಿ ಅಸಮಾನತೆ, ತಾರತಮ್ಯ, ಶೋಷಣೆ ಮತ್ತು ದಮನಗಳು, ಮುಂದುವರಿದಿವೆ. ಹಳೆ ಬಗೆಯ ಶೋಷಣೆ, ತಾರತಮ್ಯಗಳ ತೀವ್ರತೆ ಕಡಿಮೆಯಾಗುತ್ತಿದ್ದರೂ ಹೊಸಬಗೆಯ ತಾರತಮ್ಯ, ಶೋಷಣೆ ಮತ್ತು ದಮನಗಳು ಹೆಚ್ಚುತ್ತಿರುವುದರಿಂದ ಈ ದೇಶದ ತಳಸ್ತರದಲ್ಲಿರುವ ಸಮುದಾಯಗಳ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಯೇನೂ ಬರುತ್ತಿಲ್ಲ.
80





Reviews
There are no reviews yet.