ಯುದ್ಧಪೂರ್ವ ಕಾಂಡ

400.00

ಸ್ವಾತಂತ್ರ್ಯ ಬಂದು ಆಗಿನ್ನೂ ಹದಿನೈದು ವರ್ಷ ಕಳೆದಿತ್ತಷ್ಟೆ. ದೇಶವಿಭಜನೆಯ ಗಾಯ, ಅದರ ನಂತರದಲ್ಲಿ ಭುಗಿಲೆದ್ದ ಕೋಮುದಳ್ಳುರಿಯ ತಾಪದಿಂದ ಭಾರತ ಆಗಷ್ಟೆ ಸುಧಾರಿಸಿಕೊಳ್ಳುವ ಯತ್ನದಲ್ಲಿತ್ತು. ಅಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎನ್ನುವಂತೆ ೧೯೬೨ರಲ್ಲಿ ಚೀನಾದ ಜೊತೆ ಭಾರತ ಯುದ್ಧ ನಡೆಸಬೇಕಾಗಿ ಬಂತು. ಆ ಯುದ್ಧದಲ್ಲಿ ಭಾರತಕ್ಕಾದ ಹಿನ್ನಡೆಯ ಕುರಿತು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ದೂಷಿಸುವುದು ಬಿಟ್ಟರೆ, ಇನ್ನುಳಿದಂತೆ ಆ ಯುದ್ಧ ಯಾಕಾಗಿ ನಡೆಯಿತು? ಉಭಯ ದೇಶಗಳ ನಡುವೆ ರಾಜಕೀಯ ಸಂಕೀರ್ಣತೆಗಳೇನಿದ್ದವು? ಯುದ್ದಕ್ಕು ಮುನ್ನ ಭಾರತ-ಚೀನಾ ನಡುವೆ ಏನೆಲ್ಲ ಮಾತುಕತೆಗಳು ನಡೆದಿದ್ದವು? ಯುದ್ಧದಲ್ಲಿ ಭಾರತೀಯ ವಿರೋಧಪಕ್ಷಗಳ ಪಾತ್ರವೇನಿತ್ತು? ಇಂತಹ ಹಲವು ವಿಚಾರಗಳು ಇಂದಿನ ಪೀಳಿಗೆಗೆ ನಿಗೂಢವಾಗಿಯೇ ಉಳಿದಿವೆ. ಅದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕ ಯಡೂರು ಮಹಾಬಲ ಅವರು ಈ ಕೃತಿಯ ಮೂಲಕ ಮಾಡಿದ್ದಾರೆ. ಗಡಿರೇಖೆ ನಿರ್ಧರಿಸುವ ರಾಜಕೀಯ ವೈಪರೀತ್ಯದಿಂದ ಶುರುವಾಗಿ ಯುದ್ಧ ಸನ್ನಿವೇಶವನ್ನು ನಿಭಾಯಿಸುವಲ್ಲಿ ಎರಡೂ ದೇಶಗಳು ಎಡವಿದವರೆಗೆ ಪ್ರತಿಯೊಂದು ವಿವರವನ್ನೂ ಚಾರಿತ್ರಿಕ ದಾಖಲೆಗಳ ಮೂಲಕ ಇಲ್ಲಿ ಲೇಖಕರು ಬಿಚ್ಚಿಟ್ಟಿದ್ದಾರೆ.
Category: