Description
ಸಂಘಪರಿವಾರದ ಸಂವಿಧಾನ ಮನುಸ್ಮೃತಿ ಪ್ರಾತಿನಿಧಿಕ ಶ್ಲೋಕಗಳ ಅನುವಾದ
5 ಪುಸ್ತಕಗಳಿಗೆ ರೂ.120
ಮನುಸ್ಮೃತಿಯಲ್ಲಿ ಏನಿದೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಈಗಿರುವ ಸಂವಿಧಾನಕ್ಕಿಂತ ಭಿನ್ನವಾಗಿ ಜನರಿಗೆಲ್ಲಾ ನ್ಯಾಯ ನೀತಿಯ ಆಡಳಿತವೊಂದನ್ನು ಅದು ಕಲ್ಪಿಸಲಿದೆಯೇನೋ ಎಂಬ ಅರ್ಥ ಬರುವಂತೆ ಬಿಂಬಿಸಲಾಗುತ್ತಿದೆ. ಸಂಸ್ಕೃತದಲ್ಲಿ ಬರೆಯಲ್ಪಟ್ಟಿರುವ ಮನುಸ್ಮೃತಿ ಪ್ರತಿಪಾದಿಸುವ ನೀತಿಗಳು ಹಾಗೂ ಸೂತ್ರಗಳು ಎಷ್ಟು ಮಾನವ ವಿರೋಧಿಯಾದವುಗಳು ಎಂಬುದನ್ನು ಅರಿತರೆ ಮಾತ್ರವೇ ಸಂಘ ಪರಿವಾರದ ಮನುಸ್ಮೃತಿ ವಾರಸುದಾರರು ಭಾರತದಲ್ಲಿ ಯಾವ ಬಗೆಯ ಆಡಳಿತವನ್ನು ಹಾಗೂ ಸಾಮಾಜಿಕ ಪದ್ಧತಿಯನ್ನು ಜಾರಿಗೆ ತರುವ ಆಶಯ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಈ ಕೃತಿಯಲ್ಲಿ ಸಂಗ್ರಹಿತವಾಗಿರುವ ಯಾವುದೇ ಪ್ರಾತಿನಿಧಿಕ ಶ್ಲೋಕದ ಅರ್ಥವನ್ನು ಗಮನಿಸಿದರೂ ಒಟ್ಟಾರೆಯಾಗಿ ಮನುಸ್ಮೃತಿಯೆಂಬ ಈ ಪ್ರಾಚೀನ ಧರ್ಮಸೂತ್ರವು ಮನುಷ್ಯರ ನಡುವೆ ಎಷ್ಟು ಅಧರ್ಮದ ತಾರತಮ್ಯಗಳನ್ನು, ಮೇಲು ಕೀಳುಗಳನ್ನು ಪ್ರತಿಪಾದಿಸುತ್ತಿದೆ ಎಂಬುದು ಅರ್ಥವಾಗುತ್ತದೆ.




Reviews
There are no reviews yet.