Description
ಕುವೆಂಪು ವಿಚಾರ ಸಾಹಿತ್ಯ ನಿರ್ಮಾಪಕರು
ಡಾ. ಜಿ.ಎಸ್. ಉಪಾಧ್ಯ
ಯುಗದ ಕವಿ ಜಗದ ಕವಿ ಎಂದೇ ಮನೆ ಮಾತಾದ ಕುವೆಂಪು ಅವರು ವಿಚಾರ ಸಾಹಿತ್ಯ ನಿರ್ಮಾಪಕರಾಗಿ ಯುಗಪುರುಷರಾಗಿ ಮಿಂಚಿದವರು. ಅವರು ವಿಚಾರ ಕ್ರಾಂತಿಗೆ ಅಹ್ವಾನ ನೀಡಿ ಮಾನವೀಯ ಮೌಲ್ಯಗಳಿಂದ ಕೂಡಿದ ವೈಚಾರಿಕತೆಗೆ ಅಗ್ರ ಸ್ಥಾನವನ್ನು ಕಲ್ಪಿಸಿಕೊಡಲು ದುಡಿದ ಧೀಮಂತ ಚೇತನ. ಕುವೆಂಪು ಅವರ ಸಾಹಿತ್ಯದ ಮುಖ್ಯ ಗುಣ, ಜೀವಾಳ ವೈಚಾರಿಕತೆ, ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವ ಮಾನವ, ಬೆಳೆಯುತ್ತಲೇ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡಲು ತಮ್ಮ ಮಾತು ಕೃತಿಗಳ ಮೂಲಕ ಅಹರ್ನಿಶಿ ಶ್ರಮಿಸಿದದವರು ಕುವೆಂಪು.
Reviews
There are no reviews yet.